ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ, 18–8–1995

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 20:00 IST
Last Updated 17 ಆಗಸ್ಟ್ 2020, 20:00 IST
   

ಅಣ್ಣಾ ಡಿಎಂಕೆ ಸದಸ್ಯರವರ್ತನೆಗೆ ಸ್ಪೀಕರ್‌ ತರಾಟೆ
ನವದೆಹಲಿ, ಆ. 17–
ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ತೀರ್ಪನ್ನು ಜಾರಿಗೊಳಿಸುವ ಸಂಬಂಧ ಸರ್ಕಾರ ಖಚಿತ ಹೇಳಿಕೆ ನೀಡಬೇಕೆಂದು ಒತ್ತಾಯಪಡಿಸಿದ ಎಐಎಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಇಂದು ಸಭಾಧ್ಯಕ್ಷರ ಪೀಠದ ಮುಂದೆ ಗದ್ದಲ ಎಬ್ಬಿಸಿದರು. ತಮಿಳುನಾಡಿನ ಸದಸ್ಯರ ಈ ವರ್ತನೆಯನ್ನು ಸಭಾಧ್ಯಕ್ಷ ಶಿವರಾಜ ಪಾಟೀಲ್‌ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ಸಿನ ಎರಾ ಅನ್ಬರಸು ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಈ ಘಟನೆ ನಡೆಯಿತು. ಕರ್ನಾಟಕ ಸರ್ಕಾರವು ನ್ಯಾಯಮಂಡಲಿಯ ಮಧ್ಯಂತರ ವರದಿಯನ್ನು ಜಾರಿಗೆ ತರದೆ ಇರುವುದರಿಂದ ತಂಜಾವೂರು ಜಿಲ್ಲೆಯಲ್ಲಿ ಕುರುವೈ ಬೆಳೆ ಒಣಗುತ್ತಿದ್ದು ರೈತರು ಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರವು ಈ ಕೂಡಲೇ ಮಧ್ಯೆ ಪ್ರವೇಶಿಸಿ ಸಂವಿಧಾನದ ಕಾಯ್ದೆ 266ರ ಪ್ರಕಾರ ನ್ಯಾಯಮಂಡಲಿಯ ತೀರ್ಪನ್ನು ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ರಾಜಕೀಯ: ರಾಹುಲ್‌ಗಾಂಧಿಗೆ ಕಾಂಗೈ ಸ್ವಾಗತ
ನವದೆಹಲಿ, ಆ. 17 (ಯುಎನ್‌ಐ)–
ರಾಹುಲ್‌ ಗಾಂಧಿ ಅವರು ರಾಜಕೀಯ ಸೇರಿದರೆ ಕಾಂಗೈ ಪಕ್ಷವು ಸ್ವಾಗತಿಸುತ್ತದೆ ಎಂದು ಪಕ್ಷದ ವಕ್ತಾರ ವಿ.ಎನ್‌.ಗಾಡ್ಗೀಳ್‌ ಹೇಳಿದ್ದಾರೆ.

ADVERTISEMENT

ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅವರಿಗೆ ಬಿಟ್ಟದ್ದು, ರಾಹುಲ್‌ ಗಾಂಧಿ ಅವರು ರಾಜಕೀಯ ಸೇರಿದರೆ ಪಕ್ಷದ ಯುವ ಪೀಳಿಗೆಯ ವರ್ಚಸ್ಸು ವೃದ್ಧಿಯಾಗುತ್ತದೆ ಎಂದು ಗಾಡ್ಗೀಳ್‌ ಪಕ್ಷದ ನಿಲುವು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.