ಆಲಮಟ್ಟಿ ವಿವಾದ: ಕೇಂದ್ರ ಸಂಪುಟಕ್ಕೆ ದೇಶಂ ಸಚಿವರ ರಾಜೀನಾಮೆ ಇಲ್ಲ
ಹೈದರಾಬಾದ್, ಆ. 25 (ಪಿಟಿಐ)– ಆಲಮಟ್ಟಿ ವಿವಾದದ ವಿಚಾರದಲ್ಲಿ ಎಚ್.ಡಿ.ದೇವೇಗೌಡ ಅವರ ಸಂಪುಟಕ್ಕೆ ತೆಲುಗುದೇಶಂ ಪಕ್ಷದ ಸಚಿವರ ರಾಜೀನಾಮೆ ಇಲ್ಲ. ಆದರೆ, ರಾಜ್ಯಕ್ಕೆ ನ್ಯಾಯ ಒದಗಿಸುವ ವಿಚಾರದಲ್ಲಿ ಸಂಧಾನದ ಪ್ರಯತ್ನ ಮುಂದುವರೆಸಲು ಸಂಯುಕ್ತ ರಂಗದಲ್ಲಿರುವ ಪ್ರಮುಖ ಪಕ್ಷವಾದ ತೆಲುಗುದೇಶಂ ಇಂದು ನಿರ್ಧರಿಸಿದೆ.
ಇಂದು ಇಲ್ಲಿ ನಡೆದ ತೆಲುಗುದೇಶಂ ಪಕ್ಷದ ಸಂಸತ್ ಸದಸ್ಯರ ಸಭೆಯಲ್ಲಿ ಅಂತರರಾಜ್ಯ ವಿವಾದ ಪ್ರಮುಖ ಚರ್ಚಿತ ವಿಷಯವಾಗಿದ್ದು, ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.