ADVERTISEMENT

25 ವರ್ಷಗಳ ಹಿಂದೆ | ಗುರುವಾರ, 27–7–1995

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 20:47 IST
Last Updated 26 ಜುಲೈ 2020, 20:47 IST

ಪ್ರದೇಶ ಕಾಂಗೈ ಪುನರ್‌ರಚನೆ ಡಿ.ಕೆ.ನಾಯ್ಕರ್‌ ಅಧ್ಯಕ್ಷ

ನವದೆಹಲಿ, ಜುಲೈ 26– ಆರೇಳು ತಿಂಗಳ ಕಸರತ್ತಿನ ನಂತರ, ಎಐಸಿಸಿ ಅಧ್ಯಕ್ಷ ಪಿ.ವಿ.ನರಸಿಂಹರಾವ್‌ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯನ್ನು ಇಂದು ಪುನರ್‌ ರಚಿಸಿದರು. ಲೋಕಸಭೆ ಸದಸ್ಯ ಡಿ.ಕೆ.ನಾಯ್ಕರ್‌ ನೂತನ ಅಧ್ಯಕ್ಷರಾಗಿದ್ದಾರೆ.
ಎಸ್‌.ಎಂ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಚಾರ ಸಮಿತಿಯನ್ನೂ ಪುನರ್‌ರಚಿಸಲಾಗಿದೆ.

ಗುಂಡು ಹಾರಿಸಿ ಹಣ ದರೋಡೆ

ADVERTISEMENT

ಬೆಂಗಳೂರು, ಜುಲೈ 26– ಬ್ಯಾಂಕಿನಿಂದ ಹಣ ಪಡೆದು ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಅಪರಿಚಿತರು ಸಿನಿಮೀಯ ರೀತಿಯಲ್ಲಿ ಗುಂಡು ಹಾರಿಸಿ ಹಣ ಅಪಹರಿಸಿರುವ ಘಟನೆ ಇಂದು ಮಧ್ಯಾಹ್ನ ಜಯನಗರ ಟಿ. ಬ್ಲಾಕ್‌ನಲ್ಲಿ ನಡೆದಿದೆ. ಈ ಬೆಳವಣಿಗೆಯಿಂದ, ಚಾಕು ಚೂರಿಗಷ್ಟೇ ಸೀಮಿತವಾಗಿದ್ದ ಬೆಂಗಳೂರಿನ ಅಪರಾಧ ಜಗತ್ತಿಗೆ ಪಿಸ್ತೂಲು ಕೂಡ ಪ್ರವೇಶಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.