ಕಾವೇರಿ: ರಾಜ್ಯ ಅರ್ಜಿ ತಿರಸ್ಕರಿಸಲು ತಮಿಳುನಾಡು ಕರೆ
ನವದೆಹಲಿ, ಫೆ. 27– ಕಾವೇರಿ ನದಿ ವಿವಾದವನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವ ಹಲವಾರು ಯತ್ನ ಮೊದಲಿನಿಂದ ನಡೆದಿದ್ದು, ಅದೆಲ್ಲವೂ ಕರ್ನಾಟಕದ ತಿರಸ್ಕಾರ ಮನೋಭಾವದಿಂದ ವಿಫಲವಾಗಿದೆ. ತಾನು ನದಿಯ ಮೇಲ್ಭಾಗದಲ್ಲಿರುವ ಒಂದೇ ಕಾರಣಕ್ಕೆ ಹೆಚ್ಚಿನ ಪಾಲಿನ ನೀರನ್ನು ಕರ್ನಾಟಕವೇ ಬಳಿಸಿಕೊಳ್ಳುತ್ತ ಬಂದಿದೆ. ಆದ್ದರಿಂದ ನ್ಯಾಯಮಂಡಲಿಯ ಕಲಾಪವನ್ನು ಮುಂದೂಡಬೇಕೆಂದು ಕೋರಿರುವ ಅದರ ಅರ್ಜಿಯು ತಿರಸ್ಕಾರ ಯೋಗ್ಯವಾಗಿದೆ ಎಂದು ತಮಿಳುನಾಡು ಉತ್ತರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.