ADVERTISEMENT

25 ವರ್ಷಗಳ ಹಿಂದೆ: ಗುರುವಾರ 24.10.1996

25 ವರ್ಷಗಳ ಹಿಂದೆ ಗುರುವಾರ 24.10.1996

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 19:30 IST
Last Updated 23 ಅಕ್ಟೋಬರ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸಹಕಾರಿ ಕ್ಷೇತ್ರ ಪುನಶ್ಚೇತನ: ಕಾಯ್ದೆ ರಚನೆಗೆ ಶಿಫಾರಸು

ಬೆಂಗಳೂರು, ಅ. 23– ನೈಜ ವಿಕೇಂದ್ರೀಕರಣ ವ್ಯವಸ್ಥೆಗೆ ಅಡ್ಡಿಯಾಗಿರುವ ವಿವಿಧ ಪ್ರದೇಶಾಭಿವೃದ್ಧಿ ಮಂಡಳಿಗಳನ್ನು 9ನೇ ಪಂಚವಾರ್ಷಿಕ ಯೋಜನಾಭಿವೃದ್ಧಿಯಲ್ಲಿ ಹಂತಹಂತವಾಗಿ ವಿಸರ್ಜಿಸುವಂತೆ ಹಾಗೂ ದುರ್ಬಲಗೊಂಡಿರುವ ಸಹಕಾರಿ ಕ್ಷೇತ್ರದ ಪುನಶ್ಚೇತನಕ್ಕೆ ಅಗತ್ಯವಾಗಿರುವ ಹೊಸ ಕಾಯ್ದೆಯನ್ನು ರಚಿಸುವಂತೆ ರಾಜ್ಯ ಯೋಜನಾ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಪ್ರದೇಶವಾರು ಅಭಿವೃದ್ಧಿ ಮಂಡಳಿಗಳಿಗೆ ಪ್ರತ್ಯೇಕ ಹಣ ಇರುವುದಿಲ್ಲ. ಸರ್ಕಾರ ರೂಪಿಸುವ ಯೋಜನಾ ವೆಚ್ಚದಲ್ಲೇ ಇದೂ ಅಡಕವಾಗಿರುತ್ತದೆ ಎಂದು ಮಂಡಳಿಯ ಉಪಾಧ್ಯಕ್ಷ ಡಾ. ಡಿ.ಎಂ. ನಂಜುಂಡಪ್ಪ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.