ಸಹಕಾರಿ ಕ್ಷೇತ್ರ ಪುನಶ್ಚೇತನ: ಕಾಯ್ದೆ ರಚನೆಗೆ ಶಿಫಾರಸು
ಬೆಂಗಳೂರು, ಅ. 23– ನೈಜ ವಿಕೇಂದ್ರೀಕರಣ ವ್ಯವಸ್ಥೆಗೆ ಅಡ್ಡಿಯಾಗಿರುವ ವಿವಿಧ ಪ್ರದೇಶಾಭಿವೃದ್ಧಿ ಮಂಡಳಿಗಳನ್ನು 9ನೇ ಪಂಚವಾರ್ಷಿಕ ಯೋಜನಾಭಿವೃದ್ಧಿಯಲ್ಲಿ ಹಂತಹಂತವಾಗಿ ವಿಸರ್ಜಿಸುವಂತೆ ಹಾಗೂ ದುರ್ಬಲಗೊಂಡಿರುವ ಸಹಕಾರಿ ಕ್ಷೇತ್ರದ ಪುನಶ್ಚೇತನಕ್ಕೆ ಅಗತ್ಯವಾಗಿರುವ ಹೊಸ ಕಾಯ್ದೆಯನ್ನು ರಚಿಸುವಂತೆ ರಾಜ್ಯ ಯೋಜನಾ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪ್ರದೇಶವಾರು ಅಭಿವೃದ್ಧಿ ಮಂಡಳಿಗಳಿಗೆ ಪ್ರತ್ಯೇಕ ಹಣ ಇರುವುದಿಲ್ಲ. ಸರ್ಕಾರ ರೂಪಿಸುವ ಯೋಜನಾ ವೆಚ್ಚದಲ್ಲೇ ಇದೂ ಅಡಕವಾಗಿರುತ್ತದೆ ಎಂದು ಮಂಡಳಿಯ ಉಪಾಧ್ಯಕ್ಷ ಡಾ. ಡಿ.ಎಂ. ನಂಜುಂಡಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.