ಕಾವೇರಿ ನೀರು ಬಿಡುಗಡೆ: ಕೇಂದ್ರ ಮಧ್ಯಸ್ಥಿಕೆಗೆ ತಮಿಳುನಾಡು ಅಗ್ರಹ
ಮದ್ರಾಸ್, ಜುಲೈ 24 (ಪಿಟಿಐ)– ತಮಿಳುನಾಡು ರೈತರ ಸಾಂಬಾ ಬೆಳೆಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದರು.
ತಮಿಳು ಮಾನಿಲ ಕಾಂಗ್ರೆಸ್ನ ಸಿ. ಜ್ಞಾನಶೇಖರನ್ ಮತ್ತು ದೇವೇಂದ್ರ ಕುಲವೆಳ್ಳಾಳರ್ ಸಮಾಜಂನ ಡಾ.ಕೆ. ಕೃಷ್ಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕಾವೇರಿ ನೀರಾವರಿ ಪ್ರದೇಶದ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕರ್ನಾಟಕ ನೀರು ಬಿಡುಗಡೆ ಮಾಡಬೇಕು. ಈ ವಿವಾದವನ್ನು ಎರಡು ರಾಷ್ಟ್ರಗಳ ಸಮಸ್ಯೆ ಎಂದು ಪರಿಗಣಿಸದೆ ಭಾರತದ ಎರಡು ರಾಜ್ಯಗಳ ಸಮಸ್ಯೆ ಎಂದು ಪರಿಗಣಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.