ಗೌಡರು ಗೆದ್ದ ವಿಶ್ವಾಸ ಮತ
ನವದೆಹಲಿ, ಜೂನ್ 12– ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನೇತೃತ್ವದ ಜಾತ್ಯತೀತ ಮತ್ತು ಹದಿಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ಇಂದಿನಿಂದ ವಿದ್ಯುಕ್ತವಾಗಿ ಕಾರ್ಯರಂಭಿಸಲು ಲೋಕಸಭೆಯು ಇಂದು ಧ್ವನಿಮತದ ವಿಶ್ವಾಸ ಮತ ನೀಡಿತು.
ಹನ್ನೆರಡು ದಿನಗಳ ಹಿಂದೆ ಸಂಯುಕ್ತ ರಂಗದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಎಚ್.ಡಿ. ದೇವೇಗೌಡ ಅವರಿಗೆ ನಿರೀಕ್ಷೆಯಂತೆ ವಿಶ್ವಾಸಮತ ಪ್ರಾಪ್ತಿಯಾಯಿತು.
ವಿಶ್ವಾಸ ಮತಕ್ಕಾಗಿಯೇ ಕರೆಯಲಾಗಿದ್ದ ಮೂರು ದಿನಗಳ ಅಧಿವೇಶನದಲ್ಲಿ ನಿನ್ನೆ ಪ್ರಧಾನಿ ಗೌಡ ವಿಶ್ವಾಸ ಮತ ಕೋತಿ ಸೂಚನೆ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.