ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 12–3–1996

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 19:30 IST
Last Updated 11 ಮಾರ್ಚ್ 2021, 19:30 IST
   

ಸಾರಿಗೆ ಸಂಸ್ಥೆಯ 5,300 ಹುದ್ದೆ ಶೀಘ್ರ ಭರ್ತಿ
ಬೆಂಗಳೂರು, ಮಾರ್ಚ್‌ 11– ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2,029 ಚಾಲಕರ ಮತ್ತು 1,813 ನಿರ್ವಾಹಕರ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ತೆಗೆದುಕೊಂಡಿದ್ದು, 1,473 ತಾಂತ್ರಿಕ ಹುದ್ದೆಗಳನ್ನು ಸದ್ಯದಲ್ಲೇ ತುಂಬಲಾಗುವುದು ಎಂದು ಸಚಿವ ಕೆ.ಎಸ್‌.ಬೀಳಗಿ ವಿಧಾನಸಭೆಯಲ್ಲಿ ತಿಳಿಸಿದರು.

ಯು.ಬಿ.ಬಣಕಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಗ್ರಾಮೀಣ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ಒದಗಿಸುವಾಗ ಶೇ 1ರಷ್ಟು ಅಂಕಗಳನ್ನು ಸೇರಿಸುವ ಸಲುವಾಗಿ ತಾಂತ್ರಿಕ ಹುದ್ದೆ ಭರ್ತಿ ತಡವಾಗಿದೆ. ಆದರೆ ಈ ಬಗೆಗಿನ ಪ್ರಕ್ರಿಯೆ ಪ್ರಾರಂಭ ಆಗಿದೆ’ ಎಂದರು.

ಹವಾಲ: ಷರೀಫ್‌, ತಿವಾರಿಗೆ ಸಮನ್ಸ್‌
ನವದೆಹಲಿ, ಮಾರ್ಚ್‌ 11 (ಪಿಟಿಐ, ಯುಎನ್‌ಐ): ಹವಾಲ ಹಗರಣದಲ್ಲಿ ಎಂಟು ರಾಜಕಾರಣಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು ವಿಶೇಷ ನ್ಯಾಯಾಲಯ ಇಂದು ತೀರ್ಮಾನಿಸಿತು.

ADVERTISEMENT

ಎನ್‌.ಡಿ.ತಿವಾರಿ, ಆರ್‌.ಕೆ.ಧವನ್‌, ಹರ್‌ಮೋಹನ್‌ ಧವನ್‌ ಮತ್ತು ನಟವರ್‌ ಸಿಂಗ್‌ ಅವರಿಗೆ ಈ ತಿಂಗಳ 18ರಂದು ಹಾಗೂ ಜಾಫರ್‌ ಷರೀಫ್‌, ಶರದ್‌ ಯಾದವ್‌, ಬಿ.ಡಿ.ಢಾಕಣೆ ಹಾಗೂ ರಂಜಿತ್‌ ಸಿಂಗ್‌ ಅವರಿಗೆ 19ರಂದು ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.