ಗ್ರಾಮಕ್ಕೆ ನುಗ್ಗಿದ ವೀರಪ್ಪನ್: ಗುಂಡಿನ ಸುರಿಮಳೆಗೆ ಐವರ ಬಲಿ
ಮೈಸೂರು, ಆ. 10– ಬುಧವಾರ ರಾತ್ರಿ ಯಮದೂತನಂತೆ ಬಂದೆರಗಿದ ವೀರಪ್ಪನ್ ಮತ್ತು ಅವನ ಒಂಬತ್ತು ಜನರ ತಂಡ, ತಮಿಳುನಾಡು ಮತ್ತು ಕರ್ನಾಟದ ಗಡಿಯಲ್ಲಿರುವ ಚಾಮರಾಜನಗರ ತಾಲ್ಲೂಕಿನ ಪುಣಜೂರು ಗ್ರಾಮದಲ್ಲಿ ಐದು ಜನರನ್ನು ಕೊಂದು ಇಬ್ಬರನ್ನು ಗಾಯಗೊಳಿಸಿ ಪರಾರಿಯಾಗಿದೆ.
ತನ್ನ ಹೆಂಡತಿ ಮುತ್ತುಲಕ್ಷ್ಮಿಯನ್ನು ಹಿಡಿದುಕೊಡುವುದರಲ್ಲಿ ವಿಶೇಷ ಕಾರ್ಯಾಚರಣೆ ದಳದವರಿಗೆ ನೆರವಾದರೆಂಬ ಕಾರಣದಿಂದ ಈ ಗ್ರಾಮದ ಒಂದು ಕುಟುಂಬದ ಮೇಲೆ ಈ ತಂಡ ಬಂದೆರಗಿದಾಗ ಈ ಪ್ರಸಂಗ ನಡೆಯಿತು.
ದಳ ಜತೆ ಕಾಂಗೈ, ಕೆಸಿಪಿ ಹೊಂದಾಣಿಕೆ: ಬಿಜೆಪಿ ಆರೋಪ
ಬೆಂಗಳೂರು, ಆ. 10– ಹಿಂದೆ ಅಧಿಕಾರದಲ್ಲಿ ಇದ್ದ ಕಾಂಗೈ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷ ಈಗಿನ ಸರ್ಕಾರದೊಂದಿಗೆ ಹೊಂದಾಣಿಕೆಯ ರಾಜಕೀಯ ಮಾಡುತ್ತಿರುವುದು ಮೂರು ದಿನ ನಡೆದ ವಿಧಾನಮಂಡಲ ಅಧಿವೇಶನದ ಕಲಾಪದಿಂದ ರಾಜ್ಯದ ಜನತೆಗೆ ಗೊತ್ತಾದಂತಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ಇಲ್ಲಿ ಆಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.