ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 4.6.1971

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 18:59 IST
Last Updated 3 ಜೂನ್ 2021, 18:59 IST
   

ಸೂಡಾನಿನಿಂದ ಆಮದು ನಿಲ್ಲಿಸಿ ರಾಜ್ಯದಲ್ಲಿ ಹತ್ತಿ ಸಂಗ್ರಹ ಕರಗಿಸಲು ಕೇಂದ್ರಕ್ಕೆ ಸಲಹೆ

ಬೆಂಗಳೂರು, ಜೂನ್ 3– ಮೈಸೂರು ರಾಜ್ಯದಲ್ಲಿ ವ್ಯಾಪಾರಿಗಳು ಮತ್ತು ಗಿರಣಿ ಗಳು ಕೊಳ್ಳದೆ ರೈತರಲ್ಲಿ ಕೋಟ್ಯಂತರ ರೂ. ಬೆಲೆ ಹತ್ತಿ ದಾಸ್ತಾನು ಉಳಿದಿರುವ ಬಗ್ಗೆ ಶೀಘ್ರ ಪರಿಹಾರ ಸೂಚಿಸುವ ಭರವಸೆ ಯನ್ನು ಕೇಂದ್ರವು ರಾಜ್ಯ ಸರ್ಕಾರಕ್ಕೆ ನೀಡಿದೆಯೆಂದು ತಿಳಿದುಬಂದಿದೆ.

ದೇಶದಲ್ಲಿಯೇ ಗಿರಣಿಗಳು ಕೊಳ್ಳದ ‘ಲಾಂಗ್ ಸ್ಟೇಪಲ್’ ಹತ್ತಿ ರೈತರ ಬಳಿ ಉಳಿದು ಹೋಗಿರುವಾಗ ಸೂಡಾನಿನಿಂದ ಹತ್ತಿ ಆಮದು ಮಾಡಿಕೊಳ್ಳುವ ಔಚಿತ್ಯವನ್ನು ರಾಜ್ಯ ಸರ್ಕಾರದ ವಲಯಗಳಲ್ಲಿ ಪ್ರಶ್ನಿಸಲಾಗುತ್ತಿದೆ.

ADVERTISEMENT

ಚೀನಾದ ಖಂಡಾಂತರ ಕ್ಷಿಪಣಿ ಪ್ರಯೋಗ ಸಿದ್ಧತೆ: ರಾಜ್ಯಸಭೆ ಕಳವಳ

ನವದೆಹಲಿ, ಜೂನ್ 3– ಹಿಂದೂ ಮಹಾಸಾಗರದಲ್ಲಿ ಚೀನಾ ಖಂಡಾಂತರ ಕ್ಷಿಪಣಿಯೊಂದರ ಪರೀಕ್ಷಾ ಪ್ರಯೋಗ ನಡೆಸಲಿದೆಯೆಂಬ ವರದಿಗಳ ಬಗೆಗೆ ರಾಜ್ಯಸಭೆಯಲ್ಲಿ ಇಂದು ಸದಸ್ಯರು ಕಳವಳ ವ್ಯಕ್ತಪಡಿಸಿದರು.

ಬೆಳೆಯುತ್ತಿರುವ ಚೀನಾದ ಅಣ್ವಸ್ತ್ರ ಶಕ್ತಿ ಮತ್ತು ಅದರಿಂದ ಭಾರತಕ್ಕಿರುವ ಅಪಾಯವನ್ನು ಸಕಾಲದಲ್ಲಿ ಅರಿತು ಸಣ್ಣದಾಗಿಯಾದರೂ ಅಣುಬಾಂಬ್ ತಯಾ ರಿಸುವ ಪ್ರಯತ್ನಕ್ಕೆ ಕೈ ಹಾಕುವಂತೆ ಅವರು ಸರ್ಕಾರವನ್ನು ಒತ್ತಾಯಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.