ಆತುರದ ಕ್ರಮ ಕಹಿ ಭಾವನೆಗೆ ದಾರಿ: ಇಂದಿರಾ ಎಚ್ಚರಿಕೆ
ಬಿದರೆ, ಜುಲೈ 18, ಮೈಸೂರು- ಮಹಾರಾಷ್ಟ್ರ ಗಡಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಭರವಸೆ ನೀಡಿದರು.
ಸುಮಾರು 50 ಸಾವಿರ ಜನರು ನೆರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. 'ಮಹಾಜನ ವರದಿ ಜಾರಿಗೆ ತನ್ನಿ'ಎಂದು ಭಿತ್ತಿಪತ್ರ ಹಿಡಿದು ಕೆಲವರು ಘೋಷಮೆ ಕೂಗುತ್ತಿದ್ದುದನ್ನು ಪ್ರಸ್ತಾಪಿಸಿ, ಸಹನೆಯಿಂದಿರಿ ಅವಸರದ ಕ್ರಮ ಕೈಗೊಂಡಲ್ಲಿ ಸಮಸ್ಯೆ ಪರಿಹಾರವಾಗುವ ಬದಲು ಘರ್ಷಣೆ ಹಾಗೂ ಕಹಿ ಭಾವಮೆ ಹೆಚ್ಚುವುದೆಂದೂ ಅವರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.