ADVERTISEMENT

50 ವರ್ಷಗಳ ಹಿಂದೆ: ಮಾರ್ಚ್ 18, 1973

ಪ್ರಜಾವಾಣಿ ವಿಶೇಷ
Published 17 ಮಾರ್ಚ್ 2023, 21:12 IST
Last Updated 17 ಮಾರ್ಚ್ 2023, 21:12 IST
   

ಅರಸು ನಾಯಕತ್ವಕ್ಕೆ ವಿರೋಧವಿಲ್ಲ; ಸಂಪುಟ ಪುನರ್‌ರಚನೆಗೆ ಆಗ್ರಹ
ಬೆಂಗಳೂರು, ಮಾರ್ಚ್‌ 17–
ರಾಜ್ಯದ ಬಹುತೇಕ ಸಂಸತ್‌ ಸದಸ್ಯರು ಅರಸು ಅವರ ನಾಯಕತ್ವಕ್ಕೆ ವಿರೋಧವಾಗಿಲ್ಲ. ಆದರೆ ಪಕ್ಷದ ಹಾಗೂ ಆಡಳಿತದ ಕೀರ್ತಿ ಪಾಲನೆಯ ದೃಷ್ಟಿಯಿಂದ ಮಂತ್ರಿಮಂಡಲದ ಪುನರ್‌ ರಚನೆಯಾಗಬೇಕು.

ಇಂದು ನಗರಕ್ಕೆ ಆಗಮಿಸಿದ ಲೋಕಸಭೆ ಸದಸ್ಯ ಜಾಫರ್‌ ಷರೀಫ್‌ ಅವರು ಈ ಅಭಿಪ್ರಾಯವನ್ನು ವರದಿಗಾರರಿಗೆ ತಿಳಿಸಿದರು.

ದೆಹಲಿಯಲ್ಲಿ ನಡೆದ ರಾಜ್ಯದ ಕೆಲ ಸಂಸತ್‌ ಸದಸ್ಯರ ಸಭೆಯಲ್ಲಿ ನಡೆಯಿತೆನ್ನಲಾದ ಬಗೆಗಿನ ಪತ್ರಿಕಾ ವರದಿಗಳು ನಿಜವಲ್ಲವೆಂದು ಜಾಫರ್‌ ಷರೀಫ್‌ ಅವರು ತಿಳಿಸಿದರು.

ADVERTISEMENT

ಕಾಂಬೋಡಿಯಾ ಅಧ್ಯಕ್ಷರ ಅರಮನೆ ಪ್ರದೇಶದ ಮೇಲೆ ಬಾಂಬ್‌ ದಾಳಿ: ಹತ್ಯೆಗೆ ಯತ್ನ
ನಾಮ್‌ಪೆನ್ಹ್‌, ಮಾರ್ಚ್‌ 17–
ಕಾಂಬೋಡಿಯಾದ ಅಧ್ಯಕ್ಷ ಲಾನ್‌ನಾಲ್‌ ಅವರ ಹತ್ಯೆಯ ಯತ್ನವಾಗಿ ಕಾಂಬೋಡಿಯಾ ವಿಮಾನದಳಕ್ಕೆ ಸೇರಿದ ವಿಮಾನವೊಂದು ಅವರ ಅರಮನೆಯ ಮೈದಾನದಲ್ಲಿ ಬಾಂಬ್‌ಗಳನ್ನು ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.