ಮೈಸೂರು ಬಳಿ ಬೃಹತ್ ಟೈರು ಕಾರ್ಖಾನೆಗೆ ಶಂಕುಸ್ಥಾಪನೆ
ಮೈಸೂರು, ಮಾ. 23– ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು 21 ಕೋಟಿ ರೂ. ವೆಚ್ಚದ ವಿಕ್ರಾಂತ್ ಟೈರು ಕಾರ್ಖಾನೆಯ ಶಂಕುಸ್ಥಾಪನೆಯನ್ನು ಇಂದು ನೆರವೇರಿಸಿ ಬೃಹತ್ ಟೈರು ಕಾರ್ಖಾನೆ ಸ್ಥಾಪಿಸುವ ಮೈಸೂರಿಗರ ಬಹುಕಾಲದ ಕನಸನ್ನು ನನಸಾಗಿಸಿದರು.
ಮೈಸೂರು – ಕೃಷ್ಣರಾಜ ಸಾಗರ ರಸ್ತೆಯಲ್ಲಿ 222 ಎಕರೆ ಪ್ರದೇಶದಲ್ಲಿ ಜೆಕೊಸ್ಲೋವಾಕಿಯಾ ಸರ್ಕಾರದ ಸಹಕಾರದಲ್ಲಿ ಈ ಟೈರು ಕಾರ್ಖಾನೆ ಸ್ಥಾಪಿತವಾಗಿದೆ. ಮುಂದಿನ ಸೆಪ್ಟೆಂಬರ್ ವೇಳೆಗೆ ಮೊದಲ ಟೈರು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.