l ಪ್ರಧಾನಿ ಕರೆದ ಸಭೆಗೆ ಆರು ವಿರೋಧ ಪಕ್ಷಗಳ ಬಹಿಷ್ಕಾರ
ನವದೆಹಲಿ, ಜುಲೈ 30– ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಭಾನುವಾರ ಸಂಜೆ ವ್ಯವಸ್ಥೆಪಡಿಸಿದ್ದ ಸಂಸತ್ ವಿರೋಧಪಕ್ಷ ನಾಯಕರ ಸಭೆಯನ್ನು ಆರು ವಿರೋಧ ಪಕ್ಷ್ಗಗಳು ಇಂದು ಬಹಿಷ್ಕರಿಸಿದವು.
ಮಾರ್ಕ್ಸಿಸ್ಟ್ ಸಂಸತ್ ಸದಸ್ಯ ಜ್ಯೋತಿರ್ಮಯಿ ಬಸು ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಸಮಾವೇಶಗೊಂಡಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಬಹಿಷ್ಕಾರದ ನಿರ್ಧಾರ ಕೈಗೊಳ್ಳಲಾಯಿತಲ್ಲದೆ, ಸಭೆಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಪಾರ್ಲಿಮೆಂಟರಿ ವ್ಯವಹಾರ ಸಚಿವ ರಾಜ್ ಬಹಾದುರ್ ಅವರಿಗೆ ಅವರಿಗೆ ಪತ್ರ ಕೂಡ ಕಳುಹಿಸಿ ಕೊಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.