ಪ್ರಧಾನಿಗೆ ಮುಖ್ಯಮಂತ್ರಿ ಪತ್ರ
ಬೆಂಗಳೂರು, ಜುಲೈ 14– ರಾಜ್ಯದಲ್ಲಿ ಪ್ರಧಾನಿ ಪ್ರವಾಸ ಮಾಡುವ ಮುನ್ನ ರಾಜ್ಯದ ಮುಖ್ಯಮಂತ್ರಿಯೊಡನೆ ಸಮಾಲೋಚನೆ ನಡೆಸುವ ಸಂಪ್ರದಾಯವನ್ನು ಅನುಸರಿಸದಿರುವ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ತಮಗೆ ಉಂಟಾಗಿರುವ ‘ನಿಜವಾದ ನಿರಾಶೆ ಹಾಗೂ ಅಸಂತೋಷವನ್ನು’ ಪ್ರಧಾನಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಮುರ್ನಾಳ್ ಆಡಳಿತ ಕಾಂಗ್ರೆಸ್ಸಿಗೆ
ಬೆಂಗಳೂರು, ಜುಲೈ 14– ಬಾಗಲಕೋಟೆಯಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಸಂಸ್ಥಾ ಕಾಂಗ್ರೆಸ್ ಸದಸ್ಯ ಶ್ರೀ ಬಿ.ಟಿ.ಮುರ್ನಾಳ್ ಅವರು ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.
ಕಾಂಗ್ರೆಸ್ ಎರಡು ಪಕ್ಷಗಳಾಗಿ ಒಡೆದ ನಂತರ ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ಸಿಗೆ ಸೇರುತ್ತಿರುವ ಪ್ರಥಮ ಸಂಸ್ಥಾ ಕಾಂಗ್ರೆಸ್ ಶಾಸಕರಿವರು.
ಶ್ರೀ ಮುರ್ನಾಳ್ ಅವರು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದರು. ಬಾಗಲಕೋಟೆಯಿಂದ ಗೆದ್ದಿದ್ದ ಶ್ರೀ ಮುರ್ನಾಳ್ ಅವರು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಶ್ರೀ ನಿಜಲಿಂಗಪ್ಪ ಅವರು ಆರಿಸಿ ಬರಲು ಅವಕಾಶಮಾಡಿಕೊಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.