ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 9–2–1973

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 20:08 IST
Last Updated 8 ಫೆಬ್ರುವರಿ 2023, 20:08 IST
   

ಹೈಕಮಾಂಡ್‌ ಕರೆಗೆ ಆಂಧ್ರ ಕಾಂಗ್ರೆಸ್‌ ಕ್ರಿಯಾಸಮಿತಿ ತಿರಸ್ಕಾರ

ಕರ್ನೂಲು, ಫೆ. 8– ಆಂಧ್ರಪ್ರದೇಶದ ಈಗಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಜತೆ ಮಾತುಕತೆ ನಡೆಸಲು
ತನ್ನ ಪರವಾಗಿ ಯಾರೊಬ್ಬರನ್ನೂ ಕಳುಹಿಸದಿರಲು ಆಂಧ್ರ ಕಾಂಗ್ರೆಸ್‌ ಕ್ರಿಯಾಸಮಿತಿ ನಿರ್ಧರಿಸಿದೆ.

ಸಮಿತಿಯ ಅಧ್ಯಕ್ಷರು ಮತ್ತು ಮಾಜಿ ಉಪ ಮುಖ್ಯಮಂತ್ರಿಗಳೂ ಆದ ಬಿ.ವಿ. ಸುಬ್ಬಾರೆಡ್ಡಿ ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಾ, ಯಾರಾದರೂ ದೆಹಲಿಗೆ ಹೋದಲ್ಲಿ ಅವರು ವೈಯಕ್ತಿಕವಾಗಿ ಹೋದಂತೆಯೇ ಹೊರತು ಕ್ರಿಯಾ ಸಮಿತಿಯ ಪರವಲ್ಲ ಎಂದೂ, ಪ್ರಧಾನಿ ಅವರಿಂದ ಆಹ್ವಾನ ಬಂದರೆ ಮಾತ್ರವೇ ಮಾತುಕತೆಗಾಗಿ ತಾವು ದೆಹಲಿಗೆ ಹೋಗುವುದಾಗಿಯೂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.