ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಭಾನುವಾರ, 27–9–1970

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 19:31 IST
Last Updated 26 ಸೆಪ್ಟೆಂಬರ್ 2020, 19:31 IST
   

ಭೂ ಹಿಡುವಳಿ ಮಿತಿ ತಗ್ಗಿಸಲು ಪ್ರಧಾನಿ ಸಲಹೆ
ನವದೆಹಲಿ, ಸೆ. 26–
ಜಮೀನಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿ, ವ್ಯವಸಾಯದಿಂದ ಆದಾಯ ಹೆಚ್ಚುತ್ತಿರುವುದರಿಂದ ಭೂ ಹಿಡುವಳಿ ಮಿತಿಯನ್ನು ತಗ್ಗಿಸಬೇಕೆಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಹೇಳಿದರು.

ಭೂಸುಧಾರಣೆಗಳ ಬಗ್ಗೆ ಮುಖ್ಯಮಂತ್ರಿಗಳ ಸಮ್ಮೇಳವನ್ನು ಉದ್ಘಾಟಿಸಿದ ಪ್ರಧಾನಿಯವರು ಭೂಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಇರುವ ‘ರಾಷ್ಟ್ರೀಯ ಜರೂರು’ ತಿಳಿಸಿದರು.

ಹತ್ತು ತಿಂಗಳ ಹಿಂದೆ ನಡೆದ ಸಮ್ಮೇಳನದಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರುವಲ್ಲಿ ವಿಳಂಬಗತಿಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.