ರಾಜ್ಯಮಟ್ಟದ ಅಭಾವ ಪರಿಹಾರ ಸಮಿತಿ: ಅರಸು ಅಧ್ಯಕ್ಷತೆ
ಬೆಂಗಳೂರು, ಜನವರಿ 11– ಹಣ ಹಾಗೂ ಪದಾರ್ಥಗಳನ್ನು ಸಂಗ್ರಹಿಸಿ, ಅಭಾವ ಪರಿಹಾರ ಕಾರ್ಯದಲ್ಲಿ ಹೊಂದಾಣಿಕೆ ಏರ್ಪಡಿಸುವ ಉದ್ದೇಶದಿಂದ ಸರ್ಕಾರ ಮುಖ್ಯಮಂತ್ರಿ ಅರಸು ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿಯೊಂದನ್ನು ರಚಿಸಿದೆ.
ಸುಮಾರು 50 ಮಂದಿ ಸದಸ್ಯರಿರುವ ಈ ಸಮಿತಿಯಲ್ಲಿ ಎರಡು ಶಾಸನಸಭೆಗಳ ವಿರೋಧ ಪಕ್ಷದ ನಾಯಕರು, ಎರಡೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಇರುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.