ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡಲು ಒತ್ತಾಯ
ಚಳ್ಳಕೆರೆ, ನ. 15– ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಸರ್ವ ಶಕ್ತಿಯ ಸಂಕೇತವಾದ ‘ಕರ್ನಾಟಕ’ ಎಂಬ ಹೆಸರನ್ನು ರಾಜ್ಯಕ್ಕೆ ಇಡಬೇಕೆಂದು ಚಿತ್ರದುರ್ಗ ಜಿಲ್ಲಾ ಸಂಸ್ಥಾ ಕಾಂಗ್ರೆಸ್ ರಾಜಕೀಯ ಸಮ್ಮೇಳನವು ಇಂದು
ಒತ್ತಾಯಪಡಿಸಿತು.
ಸುಂದರವಾಗಿ ಅಲಂಕೃತವಾದ ವಿಶಾಲವಾದ ಬಹದ್ದೂರ್ ಮಂಟಪದಲ್ಲಿ ಅಖಿಲ ಭಾರತ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಎಸ್ಸೆನ್ ಸಮ್ಮೇಳನ ಉದ್ಘಾಟಿಸಿದರು. ಇಲ್ಲಿಯ ಎಲ್ಲ ತಾಲ್ಲೂಕು ಕಾಂಗ್ರೆಸ್ ಮುಖಂಡರೂ ಅಧ್ಯಕ್ಷರೂ ಭಾಗವಹಿಸಿ
ದ್ದರು. ಡಾ. ಕೆ.ನಾಗಪ್ಪ ಆಳ್ವ, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, ಸಚಿವರು, ಶಾಸಕರು ಮುಂತಾದವರು ಭಾಗವಹಿಸಿದ್ದರು.
‘ಕಾವೇರಿ ಬಯಲು ಜನತೆಯ ಮರಣಶಾಸನಕ್ಕೆ ಸಹಿ ಹಾಕಲಾರೆ’
ಲಾಲ್ಬಹದ್ದೂರ್ ಮಂಟಪ, ಚಳ್ಳಕೆರೆ, ನ. 15– ‘ಕಾವೇರಿ ನೀರಿನ ವಿವಾದದಲ್ಲಿ ಯಾವ ಒಪ್ಪಂದಕ್ಕೆ ಸಹಿ ಹಾಕಿದರೂ ಅದು ಕಾವೇರಿ ಬಯಲಿನ ಜನತೆಯ ಮರಣಶಾಸನಕ್ಕೆ ಸಹಿ ಹಾಕಿದಂತೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಸಾರಿದರು.
ಚಿತ್ರದುರ್ಗ ಜಿಲ್ಲಾ ರಾಜಕೀಯ ಸಮ್ಮೇಳನವನ್ನು ಉದ್ದೇಶಿಸಿ ಭಾಷಣ ಮಾಡಿದ ಶ್ರೀ ವೀರೇಂದ್ರ ಪಾಟೀಲರು, ಕಾವೇರಿ ವಿವಾದವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.