75 ವರ್ಷಗಳ ಹಿಂದೆ
ನವದೆಹಲಿ, ಸೆಪ್ಟೆಂಬರ್ 3– ಪೂರ್ವ ಪಂಜಾಬ್ ರೈಲ್ವೆ ವಿಭಾಗಕ್ಕೆ ಸೇರಿದ ಗುರುದಾಸ್ಪುರದ ಬಳಿ ಇಂದು ಮಧ್ಯಾಹ್ನ ‘ಕಾಶ್ಮೀರ್ ಮೇಲ್’ ರೈಲು ಹಳಿ ತಪ್ಪಿದ್ದು, 20 ಪ್ರಯಾಣಿಕರು ಮೃತಪಟ್ಟಿದ್ದಾರೆ. 45 ಮಂದಿ ಗಾಯಗೊಂಡಿದ್ದಾರೆ.
ಈ ರೈಲು ಪಠಾಣ್ಕೋಟ್ನಿಂದ ದೆಹಲಿಗೆ ಬರುತ್ತಿತ್ತು. ಮಧ್ಯಾಹ್ನ 2.10ಗಂಟೆಗೆ ಹಳಿ ತಪ್ಪಿದೆ.
ಮೂರು ಬೋಗಿಗಳಿಗೆ ಹಾನಿಯಾಗಿದೆ. ಪರಿಹಾರ ಕಾರ್ಯಾಚರಣೆ ಹಾಗೂ ವೈದ್ಯರ ತಂಡವು ಘಟನಾ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳಿಗೆ ಅಗತ್ಯ ನೆರವು, ಚಿಕಿತ್ಸೆ ನೀಡುವಲ್ಲಿ ನಿರತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.