ಮಹಾಜನ್ ವರದಿ ಸಂಸತ್ತಿಗೆ: ಕೇಂದ್ರ ಸರ್ಕಾರದ ಯೋಚನೆ
ಬೆಂಗಳೂರು: ಆ.21–ಮಹಾರಾಷ್ಟ್ರದ ಒತ್ತಾಯದ ಫಲವಾಗಿ, ಇದೀಗ ಮತ್ತೊಮ್ಮೆ ಬಿಸಿಯೇರತೊಡಗಿರುವ ಗಡಿ ವಿವಾದದ ಇತ್ಯರ್ಥಕ್ಕೆ ಮಹಾಜನ್ ವರದಿಯನ್ನು ಸಂಸತ್ತಿನ ಮುಂದೆ ಒಯ್ಯುವುದೊಂದೇ ಸ್ವಲ್ಪ ಸರಳ ದಾರಿ ಎಂದು ಕೇಂದ್ರ ಸರ್ಕಾರವು ಅಭಿಪ್ರಾಯಪಡತೊಡಗಿದೆಯೆಂದು ಬಲ್ಲ ಮೂಲಗಳು ಇಲ್ಲಿ ಶ್ರುತಪಡಿಸಿವೆ.
ಸರ್ಕಾರದ ಪೂರ್ವ ನಿರ್ಧಾರವು ಯಾವುದೂ ಇಲ್ಲದೆ ವರದಿಯನ್ನೇ ಸಂಸತ್ತಿನ ಪರಿಶೀಲನೆಗೆ ಮಂಡಿಸುವುದು ದೀರ್ಘ ಕಾಲದ ಚರ್ಚೆ ಹಾಗೂ ತಿದ್ದುಪಡಿಗಳ ಮಂಡನೆಗಳಿಗೆ ಅವಕಾಶವಾಗುವುದಾದರೂ, ಸಂಸತ್ತು ಕೊಡುವ ನಿರ್ಣಯವು , ಕೇಂದ್ರ ತಾನೇ ನಿರ್ಧಾರ ಕೈಗೆತ್ತಿಕೊಳ್ಳುವ ತಪ್ಪಿಸುತ್ತದೆ ಎಂಬುದನ್ನು ಕೇಂದ್ರ ನಾಯಕರು ಮನಗಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.