ಮುಂಬೈ, ಅ. 5- ಇಲ್ಲಿನ ಹತ್ತಿ ಗಿರಣಿ ಕಾರ್ಮಿಕರ ಮುಷ್ಕರಕ್ಕೆ ಈ ದಿನ 53ನೆಯ ದಿನ ತುಂಬಿತು. 23 ಗಿರಣಿಗಳಲ್ಲಿ 26 ಸಾವಿರ ಕಾರ್ಮಿಕರು ಕಾರ್ಯಗತರಾಗಿರುವುದಾಗಿ ಸರ್ಕಾರಿ ಸುದ್ದಿ ತಿಳಿಸುತ್ತದೆ.
ಸೋಷಲಿಸ್ಟ್ ಪಕ್ಷದ ಹತೋಟಿ ಯಲ್ಲಿರುವ ಮಿಲ್ ಮಜ್ದೂರ್ ಸಭಾ ಸುದ್ದಿಯ ಪ್ರಕಾರ, ಎಂಟು ಸಾವಿರ ಕೆಲಸಗಾರರು ಏಳು ಗಿರಣಿಗಳಲ್ಲಿ ಹಾಜರಿದ್ದರೆಂದು ತಿಳಿದುಬಂದಿದೆ.
ಜಕಾರ್ತಾ, ಅ. 5- ಅಂಬಾಯನ್ ದ್ವೀಪದಲ್ಲಿ ಸ್ಥಾಪಿತವಾಗಿರುವ ದಕ್ಷಿಣ ಮೊಲಕ್ಕಾಗಳ ದಂಗೆಕೋರ ಸರ್ಕಾರದ ವಿರುದ್ಧ ಕಾರ್ಯ ಚಟುವಟಿಕೆಯನ್ನುಇಂಡೊನೇಷ್ಯಾ ಸರ್ಕಾರ ಕೈಗೊಂಡಿದೆ ಎಂಬ ಸುದ್ದಿಗೆ ಮನ್ನಣೆ ದೊರೆತಿದೆ.
ಹಾಲೆಂಡಿನ ಪ್ರಧಾನಿಗೆ ಕಳಿಸಿರುವ ತಂತಿಯೊಂದರಲ್ಲಿ ಇಂಡೊನೇಷ್ಯಾ ಪ್ರಧಾನಿ, ಇಚ್ಛೆ ಇಲ್ಲದಿದ್ದರೂ ಸರ್ಕಾರ ಈ ಕ್ರಮ ಕೈಗೊಳ್ಳಬೇಕಾಯಿತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.