ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ 7 – 4– 1972

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 19:30 IST
Last Updated 6 ಏಪ್ರಿಲ್ 2022, 19:30 IST
   

ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಇದ್ದರೆ ಲಂಚ ನಿರ್ಮೂಲನದ ಸೊಲ್ಲು ಅಸಂಬದ್ಧ: ಅರಸು

ಮೈಸೂರು, ಏ. 6– ಪ್ರಜಾತಂತ್ರ ರಾಷ್ಟ್ರದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು, ಮಂತ್ರಿಗಳು ಮತ್ತು ಅಧಿಕಾರಿಗಳು ನೈತಿಕವಾಗಿ ಉನ್ನತ ಮಟ್ಟದಲ್ಲಿದ್ದು, ಇತರರಿಗೆ ಮೇಲ್ಪಂಕ್ತಿಯಾಗಿರುವುದು ಅಗತ್ಯವೆಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಇಲ್ಲಿ ತಿಳಿಸಿದರು.

ವಿವಿಧ ರಾಜ್ಯಗಳ ಮುಖ್ಯ ಜಾಗೃತ ಆಯೋಗದ ಅಧಿಕಾರಿಗಳಿಗಾಗಿ ಇಲ್ಲಿ ಏರ್ಪಡಿಸಲಾಗಿರುವ ಶಿಕ್ಷಣ ಕೋರ್ಸ್‌ ಅನ್ನು ಶ್ರೀ ಅರಸು ಅವರು ಉದ್ಘಾಟಿಸಿದರು.

ADVERTISEMENT

‘ಪ್ರಜಾತಂತ್ರದಲ್ಲಿ ರಾಜಕಾರಣಿಗಳು, ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಭ್ರಷ್ಟಾಚಾರಿಗಳಾಗಿದ್ದರೆ ಭ್ರಷ್ಟಾಚಾರ ನಿರ್ಮೂಲನದ ಮಾತನ್ನು ಮರೆತುಬಿಡಬೇಕು. ದುರಾಸೆ– ಆಮಿಷ ಮತ್ತು ಲಂಚಗುಳಿತನದ ವಿರುದ್ಧ ಕರ್ತವ್ಯನಿಷ್ಠೆ, ಅಪರಿಗ್ರಹ, ನಿಸ್ವಾರ್ಥ ಬುದ್ಧಿಯ ಆತ್ಮಶಕ್ತಿಯನ್ನು ಬೆಳೆಸಿದರೆ ಮಾತ್ರ ಭ್ರಷ್ಟಾಚಾರವನ್ನು ನಿರೋಧಿಸಲು ಸಾಧ್ಯ’ ಎಂದು ಶ್ರೀ ಅರಸು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.