ADVERTISEMENT

25 ವರ್ಷಗಳ ಹಿಂದೆ | ಗ್ರಾಮೀಣ ಕೃಪಾಂಕ: ಮೂಡದ ಒಮ್ಮತ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಗ್ರಾಮೀಣ ಕೃಪಾಂಕ:ಮೂಡದ ಒಮ್ಮತ

ಬೆಂಗಳೂರು, ಅ. 23– ಒಟ್ಟು ಶೇ 50ರ ಮೀಸಲಾತಿಯಲ್ಲಿ ಗ್ರಾಮೀಣವಿದ್ಯಾರ್ಥಿಗಳಿಗೆ ಶೇ 10ರಷ್ಟು ಸ್ಥಾನಗಳನ್ನು ಮೀಸಲು ಇಡುವ ರಾಜ್ಯ ಸರ್ಕಾರದ ಉದ್ದೇಶಿತ ಮಸೂದೆ ಕುರಿತು ಇಂದು ಸಂಜೆ ಇಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಸರ್ವಸಮ್ಮತಿ ಮೂಡಲಿಲ್ಲ.

ಒಂದು ವಾರದೊಳಗಾಗಿ ಮತ್ತೊಂದು ಸಭೆ ನಡೆಸಿ ಇದೇ ಅಧಿವೇಶನದಲ್ಲಿಯೇ ಮಸೂದೆ ಮಂಡಿಸಲು ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ತಿಳಿಸಿದರು.

ದುಬಾರಿ ನಿಲುಗಡೆ ಶುಲ್ಕ

ಬೆಂಗಳೂರು, ಅ. 23– ತೀವ್ರ ವಿರೋಧದ ನಡುವೆ ನಗರದ ಹದಿನಾರು ರಸ್ತೆಗಳಲ್ಲಿ ವಾಹನ ನಿಲುಗಡೆ ಶುಲ್ಕ ಪದ್ಧತಿಯನ್ನು ನವೆಂಬರ್ 1ರಿಂದ ಜಾರಿಗೊಳಿಸಲು ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.