75 ವರ್ಷಗಳ ಹಿಂದೆ
ನವದೆಹಲಿ, ಆಗಸ್ಟ್ 15– ಸ್ವಾತಂತ್ರ್ಯವು ತನ್ನೊಡನೆ ತಂದ ಜವಾಬ್ದಾರಿಯನ್ನು ದೇಶದ ಪ್ರತಿಯೊಬ್ಬ ಪುರುಷನೂ, ಸ್ತ್ರೀಯೂ ಅರಿತು, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂದು ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರು ನಾಡಿನ ಸ್ವಾತಂತ್ರ್ಯ ದಿನದ ಸಂದೇಶ ನೀಡುತ್ತ, ಕರೆ ಇತ್ತಿದ್ದಾರೆ.
‘ಜನತೆ ಈ ಜವಾಬ್ದಾರಿಯನ್ನರಿತು ಕೊಳ್ಳದಿದ್ದರೆ, ಅವರು ಸ್ವಾತಂತ್ರ್ಯದ ಅರ್ಥವನ್ನೂ ಅರಿತುಕೊಂಡಂತಾಗದೆ, ಆಂತರಿಕ ಅಥವಾ ಬಾಹ್ಯ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾದೀತು’ ಎಂದು ಪಂಡಿತ ಅವರು ಎಚ್ಚರಿಕೆಯ ನುಡಿಯಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.