ADVERTISEMENT

25 ವರ್ಷಗಳ ಹಿಂದೆ: ವೀರಪ್ಪನ್‌ ಶರಣಾಗಬಹುದು – ಕೃಪಾಕರ, ಸೇನಾನಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 23:00 IST
Last Updated 22 ಅಕ್ಟೋಬರ್ 2022, 23:00 IST
   

ಮೃದು ಧೋರಣೆ ತಾಳಿದರೆ ವೀರಪ್ಪನ್‌ ಶರಣಾಗಬಹುದು – ಕೃಪಾಕರ, ಸೇನಾನಿ

ಬೆಂಗಳೂರು, ಅಕ್ಟೋಬರ್‌ 22– ಸರ್ಕಾರವು ದಂತಚೋರ ವೀರಪ್ಪನ್‌ ಶರಣಾಗತಿ ವಿಷಯದಲ್ಲಿ ಮೃದುಧೋರಣೆ ತೋರಿದರೆ ಆತ ಶರಣಾಗಬಹುದು ಎಂದು ವೀರಪ್ಪನ್‌ ಹಿಡಿತದಿಂದ ಸುರಕ್ಷಿತವಾಗಿ ಹಿಂತಿರುಗಿದ ಖ್ಯಾತ ಛಾಯಾಚಿತ್ರಗ್ರಾಹಕ ಕೃಪಾಕರ ಅಭಿಪ್ರಾಯಪಟ್ಟಿದ್ದಾರೆ.

‘ಇಳಿ ವಯಸ್ಸಿನಲ್ಲಿರುವ ವೀರಪ್ಪನ್‌ ತನ್ನ ಜೀವನದ ಸಂದಿಗ್ದ ಕಾಲದಲ್ಲಿದ್ದು, ಸರ್ಕಾರ ಜೀವರಕ್ಷಣೆ ಭರವಸೆ ನೀಡಿದರೆ ನಾಗರಿಕ ಜೀವನ ನಡೆಸಲು ಆಸಕ್ತಿ ತೋರಿದ್ದಾನೆ. ಮುಖ್ಯವಾಹಿನಿಗೆ ಬರಲು ಇಚ್ಛಿಸಿರುವ ಆತ, ಸರ್ಕಾರದಿಂದ ಬರುವ ಆಶಾದಾಯಕ ಉತ್ತರದ ನಿರೀಕ್ಷೆಯಲ್ಲಿದ್ದಾನೆ’ ಎಂದು ಅವರು ಇಲ್ಲಿ ನುಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.