
ಅಂತೂ ಬಂತೂ ಚುನಾವಣೆ ಬಂತು
ಮತದಾರನ ಮುಂದಿಟ್ಟರು ಪ್ರಣಾಳಿಕೆಗಳ ಗಂಟು
ಮರಿ ಪುಢಾರಿಗಳು ಹಂಚಿದರು ರೊಕ್ಕದ ಗಂಟು
ಮತದಾರನಿಗೆ –ರಾಜಕಾರಣಿಗೆ ಬೆಸೆಯಿತು ನಂಟು
ಮತದಾನ ಬಳಿಕ ಕಳಚೀತು ನಂಟು
ಗೆದ್ದ ಮೇಲೆ ಬರಲಿದೆ ಕೋಟು-, ಸೂಟು-ಬೂಟು
ತೆರೆದು ಓದಲಿಲ್ಲ ಸಂವಿಧಾನದ ಗಂಟು
ಮೂಲೆಗೆ ಸೇರಲಿದೆ ಪ್ರಣಾಳಿಕೆಗಳ ಗಂಟು
ಬಿಚ್ಚಿ ನೋಡುವುದಿಲ್ಲ ಜನರ ಸಮಸ್ಯೆಗಳ ಗಂಟು
ಮತದಾರನ ಮೇಲೆ ಹೇರುತ್ತಾರೆ ತೆರಿಗೆ ಗಂಟು
ಅಂತೂ ಮತ್ತೆ ಚುನಾವಣೆ ಬಂತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.