ADVERTISEMENT

ಅಮಾಯಕರಿಗೆ ಹಿಂಸೆ ಬೇಡ

ಬಿ.ಲಕ್ಕಣ್ಣ, ಬೆಂಗಳೂರು
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಬೆಳ್ತಂಗಡಿ ತಾಲ್ಲೂಕಿನ ಕಾಲೇಜು ವಿದ್ಯಾರ್ಥಿ ಮಲೆಕುಡಿಯ ಸಮುದಾಯದ 23 ವರ್ಷದ ವಿಠಲ ಎಂಬ ವಿದ್ಯಾರ್ಥಿಯನ್ನು ಬಂಧಿಸಿದ ಪ್ರಕರಣ ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುವ ವರ್ತನೆಯಂತಿದೆ.

ನಕ್ಸಲೀಯರು ಹಿಂಸೆಯ ಹಾದಿ ತೊರೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲೆಂದು ಸರ್ಕಾರ ಕರೆ ನೀಡುತ್ತದೆ. ಮತ್ತೊಂದೆಡೆ ಆದಿವಾಸಿ  ಸುಶಿಕ್ಷಿತನಿಗೆ ನಕ್ಸಲೀಯ ಎಂಬ ಹಣೆಪಟ್ಟಿ ಕಟ್ಟುತ್ತದೆ.

ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ವಿಠಲ ಮಲೆಯಕುಡಿಯ ಯುವಕ ಹಾಗೂ ಅವರ ತಂದೆಯನ್ನು  ಬಂಧಿಸಿದ ಕ್ರಮ ಸಮರ್ಥನೀಯವಲ್ಲ. ಸರ್ಕಾರ ತಕ್ಷಣವೇ ಇಬ್ಬರನ್ನು ಬಿಡುಗಡೆ ಮಾಡಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.