
ಶಾಸಕರು ಅರ್ಹರೆಂದು
ಸಾಬೀತಾಗಿ ಮರಳಿದ್ದಾರೆ
ಕರ್ನಾಟಕದ ರಾಜಕೀಯಕ್ಕೆ
ಈಗ ರಾಜಕೀಯ ರಂಗ
ಪಡೆದುಕೊಂಡಿದೆ ಅನೇಕ ರಂಗು
ಮುಖ್ಯಮಂತ್ರಿಗಳಿಂದ
ಈ ಶಾಸಕರೆಂಬ ಮೀನುಗಳ
ಸೆಳೆಯಲು ಆಮಿಷಗಳ
ನೂರೆಂಟು ಗಾಳ
ಹಿಂದಿನದೆಲ್ಲ ಮರೆತು
ಅಧಿಕಾರದ ವಾಸನೆಯ
ಗಾಳವನ್ನು ಕಚ್ಚಲಿವೆ,
ಕಚ್ಚಿ ಕುಣಿಯಲಿವೆ
ಅನುಸರಿಸಿ ಮುಖ್ಯಮಂತ್ರಿಗಳ
ತಾಳ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.