ADVERTISEMENT

ಆಯೋಗದ ಕ್ರಮ ಸ್ವಾಗತಾರ್ಹ

ತುಳಜಪ್ಪ ಕೈಕಾಡಿ ಬುಧೇರಾ, ಬೀದರ್
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಸದ್ಯದ ವಿಧಾನಸಭಾ ಚುನಾವಣೆಯ ಜೋರು ಹಿಂದೆಂದಿಗಿಂತೂ ಹೆಚ್ಚಿದೆ. ಅದರಂತೆ ಹಣ, ಹೆಂಡ ಮತ್ತಿತರ ವಸ್ತುಗಳ ಹಂಚುವಿಕೆ ಸದ್ದಿಲ್ಲದೆ ನಡೆಯುತ್ತಿದೆ. ಇದನ್ನು ತಡೆಯಲು ಚುನಾವಣಾ ಆಯೋಗ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ.

ಇದರಿಂದ ಯಾವುದೇ ಹೆದರಿಕೆಯಿಲ್ಲದೆ ಬಿಂದಾಸಾಗಿ ಮತದಾರರನ್ನು ತಪ್ಪುದಾರಿಗೆ ಎಳೆಯುವುದು ತಪ್ಪುತ್ತದೆ. ಇಲ್ಲಿಯವರೆಗೆ ಹಲವಾರು ಅಭ್ಯರ್ಥಿಗಳ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಇಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಏನಾದರೂ ಸುಧಾರಣೆ ಸಾಧ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.