ADVERTISEMENT

ಕಂಬಾರರು

ಅದಿತಿ ನಾಯಕ, ಬೆಂಗಳೂರು
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಶಿವಾಪುರವನ್ನು ತಾವು ಧೇನಿಸುತ್ತಲೇ
ಅದನ್ನು ಎಲ್ಲರ ಕಣ್ಣೆದುರಿಗೆ
ತಂದವರಿವರು
ನವಿಲಿನ ಸಾವಿರ ಕಣ್ಣುಗಳನ್ನು
ವರ್ಣಿಸುತ್ತಲೇ
ಅದನ್ನು ನಮ್ಮೆಲ್ಲರ
ಕಣ್ಣ ಮುಂದೆ ಕುಣಿಸಿದವರು
ಬಿಂಬ ಪ್ರತಿಬಿಂಬಗಳ ಮಾಯಕ
ಹೇಳುವುದೂ ಅವರ ಕಾಯಕ
ಅಲ್ಲಿಂದ ಮುಂದೆ ಚಕೋರಿಯ ಚುರುಕು
ಚಂದ್ರಶಿಕಾರಿಯ ಬೇಟೆ, ಬೇಟ
ಯಾವ ವಸ್ತುವಿಗಿಲ್ಲ ಫರಕು
ಎಲ್ಲ ಮಾಯಾಲೋಕವನ್ನು
ಚುಂಬಕದಂತೆ ಸೆಳೆವ ತಾವನ್ನು
ಅರ್ಧ ಶತಮಾನದಿಂದ ಮುಂದೆ
ಇಡುತ್ತಲೇ ಇರುವವರು
ನಮ್ಮ ಘೋಡಗೇರಿಯ
ಚಂದ್ರಶೇಖರ ಕಂಬಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.