ADVERTISEMENT

ಕಡಿವಾಣವಿರಲಿ

ಧರ್ಮಾನಂದ ಶಿರ್ವ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST

ನಾಯಿ ಸಾಕಲು ಬಿ.ಬಿ.ಎಂ.ಪಿ.ಯಿಂದ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 4). ಇದು ಸ್ವಾಗತಾರ್ಹ. ಇನ್ನು ಮುಂದೆ ಸಾಕುನಾಯಿಗಳ ಕೊರಳಪಟ್ಟಿಯಲ್ಲಿ ಪರವಾನಗಿ ಪತ್ರವೂ ನೇತಾಡಬಹುದು.

ಪರವಾನಗಿ ನೀಡುವುದರ ಜೊತೆಗೆ, ಮುಂಜಾನೆ ಸಾಕುನಾಯಿಗಳನ್ನು ಹೊರಗೆ ಅಡ್ಡಾಡಿಸುವ ನೆಪದಲ್ಲಿ ಬೀದಿಯ ಮೇಲೆ ಸಿಕ್ಕಸಿಕ್ಕಲ್ಲಿ ಶೌಚ ಮಾಡಿಸುವ ಕ್ರಮಕ್ಕೆ ಕಡಿವಾಣ ಹಾಕಬೇಕು. ಇಷ್ಟಪಟ್ಟು ಸಾಕಿ, ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಗೆ ಪಾತ್ರವಾದ ನಾಯಿಗಳ ಈ ನಡೆ, ಸಾಕುವವರಿಗೆ ಯಾವ ಘನತೆಯನ್ನು ತಂದುಕೊಡುತ್ತದೆ? ಮೊದಲೇ ಬೀದಿಯುದ್ದಕ್ಕೂ ಇರುವ ಕಸ, ಉಗುಳಿನಿಂದ ತಪ್ಪಿಸಿಕೊಳ್ಳಲು ಸರ್ಕಸ್ ಮಾಡಿಕೊಂಡು ನಡೆಯಬೇಕಾದ ದಾರಿಹೋಕನ ಸಂಕಷ್ಟಕ್ಕೆ ನಾಯಿಯ ಶೌಚವೂ ಸೇರ್ಪಡೆಯಾಗಿದೆ. ಪರವಾನಗಿ ಶುಲ್ಕ ವಿಧಿಸುವುದರ ಜೊತೆಗೆ ಇಂಥ ಕೃತ್ಯ ನಡೆಸಿದವರಿಗೆ ದಂಡ ವಿಧಿಸಲೂ ಕ್ರಮ ಕೈಗೊಳ್ಳುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT