ಈಚೆಗಷ್ಟೆ ನವೀಕರಣಗೊಂಡಿರುವ ರಸ್ತೆಯ ಅವಸ್ಥೆ ಇದು. ಯಲಹಂಕ ಎನ್.ಇ.ಎಸ್. ಆಫೀಸಿನಿಂದ ದೊಡ್ಡಬಳ್ಳಾಪುರ ಮಾರ್ಗದ ರಸ್ತೆ. ಕಳಪೆ ಕಾಮಗಾರಿಯಿಂದಾಗಿ ಪಾದಚಾರಿ ರಸ್ತೆ ನಡಿಗೆಗೇ ಅದುರಿದೆ.
ಗುಂಡಿ ಬಿದ್ದ ಜಾಗ ಮುಚ್ಚಲು ಕಸ ಸುರಿಯಲಾಗಿದೆ. ಎಳನೀರಿನ ಬಡ್ಡೆ ತುಂಬಿದ್ದಾರೆ. ಮೂರು ಕಡೆಗಳಲ್ಲಿ ಪಾದಚಾರಿ ರಸ್ತೆಯ ನಡುವೆಯೇ ಹೊಂಡಗಳು ಸೃಷ್ಟಿಯಾಗಿದೆ.
ಬೆಳಗಿನ ನಡಿಗೆಗೆ ಬರುವ ಹಿರಿಯರು ಬಿದ್ದರೆ ನೇರ ಸ್ವರ್ಗಕ್ಕೇ ದಾರಿ ಎಂಬಂತೆ ಆಗಿದೆ. ಸಂಬಂಧಿಸಿದವರು ದಯವಿಟ್ಟು ಗಮನಿಸುವರೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.