ಹಿರಿಯ ವಿಮರ್ಶಕ
ಗಿರಡ್ಡಿ ಗೋವಿಂದರಾಜ ನಿಧನ;
ಕನ್ನಡ ವಾಙ್ಮಯಲೋಕ ವಿಷಣ್ಣ!
‘ಸಂಕ್ರಮಣ’ದಿಂದ ಮೊದಲಾದ
ಸಾಹಿತ್ಯ ಪಯಣ
ಬಹು ಫಲಪ್ರದ! (ಯಾರು ಮೀರಬಲ್ಲರು
ಮರಣ?)
ಚಂಪಾ, ಪಟ್ಟಣಶೆಟ್ಟಿ, ಗಿರಡ್ಡಿ
‘ಒಂದೆ ಗರಡಿಯೊಳೋದಿಹ ಮಾನಸರ್!’
ಗಿರಡ್ಡಿಗಿದೊ ಶ್ರದ್ಧಾಂಜಲಿ;
‘ಇಂದವನ್ ನಾಳೆ ನಾನ್!’ ಎಂಬ ನುಡಿ
ಅಂತಿರಲಿ.
(ಅಂಥ ಧೀಮಂತರು ಮರ ಮರಳಿ
ಹುಟ್ಟಿ ಬರಲಿ!)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.