ADVERTISEMENT

ಧಾರ್ಮಿಕ ಮುಖಂಡರ ಸಲ್ಲದ ನಡವಳಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಮುಸ್ಲಿಂ ಸಂಘಟನೆಗಳ ರಾಜಕಾರಣ ಕುರಿತ ಮಹಮ್ಮದ್ ಮುಸ್ತಫಾ ಆತೂರು ಅವರ ಪತ್ರ (ಪ್ರ ವಾ ವಾ ಮಾರ್ಚ್ 15)  ಎಲ್ಲರ ಕಣ್ಣು ತೆರೆಸುವಂತಿದೆ. ಧರ್ಮ ಮತ್ತು ರಾಜಕಾರಣ ಎರಡು ಬೇರೆ ಬೇರೆ ಕ್ಷೇತ್ರಗಳು.
 
ಆದರೆ ಇಂದು ಧಾರ್ಮಿಕ ಮುಖಂಡರು ರಾಜಕಾರಣದಲ್ಲಿ ಮೂಗು ತೂರಿಸಿ ಇಡೀ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಈ ಬೆಳವಣಿಗೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.

ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಸಮಾಜ, ಧರ್ಮವನ್ನು ಬಳಸಿಕೊಳ್ಳುವುದು ಹೊಸದಲ್ಲ. ಆದರೆ ಈ ವಿಷಯದಲ್ಲಿ ಧರ್ಮಾಧಿಕಾರಿಗಳು ಎಚ್ಚರದಿಂದಿರಬೇಕು. ಆದರೆ ಅವರೇ ಸರ್ಕಾರ ಮತ್ತು ರಾಜಕೀಯ ಪಕ್ಷಗಳನ್ನು  ಬೆಂಬಲಿಸುವ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈ ಬೆಳವಣಿಗೆ ಜನತಂತ್ರ ವ್ಯವಸ್ಥೆಗೆ ಮಾರಕ.
 
ಧಾರ್ಮಿಕ ಮುಖಂಡರೇ ರಾಜಕೀಯ ಪಕ್ಷಗಳ ಪರವಾಗಿ ನಿಲ್ಲುವುದಾದರೆ ಜನರಿಗೆ ತಿಳುವಳಿಕೆ ಹೇಳುವವರು ಯಾರು? ಧಾರ್ಮಿಕ ಮುಖಂಡರಿಗೂ ಜನ ಸಾಮಾನ್ಯರಿಗೂ ವ್ಯೆತ್ಯಾಸ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮಗಳ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.