ADVERTISEMENT

`ನಿಪ್ಪಾಣಿ' ಜಿಲ್ಲೆಯಾಗಲಿ

ಸಂ.ಮಾ.ಗಾಣಿಗೇರ, ಹುನಗುಂದ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಪಾಟೀಲ ಪುಟ್ಟಪ್ಪನವರ ಲೇಖನ (ಪ್ರ. ವಾ. ಡಿ. 19 `ಸಂಗತ') ಮಾಹಿತಿ ಪೂರ್ಣವಾಗಿದೆ. ಕೇರಳದವರು ಸದ್ದಿಲ್ಲದೇ, `ಕಾಸರಗೋಡನ್ನು' ಜಿಲ್ಲೆಯಾಗಿ ಪರಿವರ್ತಿಸಿ ಅದು ಕರ್ನಾಟಕಕ್ಕೆ ಸೇರದಂತೆ ಮಾಡಿದ್ದಾರೆ.

ನಮ್ಮವರ ಅಸಡ್ಡೆಯಿಂದ ಮರಾಠಿಗರಿಗೆ ಬೆಳಗಾವಿಯ ಮೇಲೆ ಹಕ್ಕು ಸಾಧಿಸಲು ಅನುಕೂಲವಾಗಿದೆ. ಹೇಗೂ ಬೆಳಗಾವಿಯಲ್ಲಿ ಧೈರ್ಯ ಮಾಡಿ `ಸುವರ್ಣ ವಿಧಾನಸೌಧ' ನಿರ್ಮಾಣ ಮಾಡಿ, ಮರಾಠಿಗರಿಗೆ ಬೆಳಗಾವಿಯ ಆಸೆ ಬಿಡುವಂತೆ ಮಾಡಿದ್ದಾರೆ. ಇದು ಶ್ಲಾಘನೀಯ ಸಾಧನೆ.

ಡಾ. ಪಾಟೀಲ ಪುಟ್ಟಪ್ಪನವರ ಸಲಹೆಯಂತೆ, ಖರ್ಚು ವೆಚ್ಚಗಳಿಗೆ ಅಂಜದೇ ಮುಖ್ಯಮಂತ್ರಿಗಳು ಇದೇ ಬಜೆಟ್ ಅಧಿವೇಶನದಲ್ಲಿ ನಿಪ್ಪಾಣಿ ಜಿಲ್ಲೆಯನ್ನು ಘೋಷಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.