ADVERTISEMENT

ಪೂರ್ವಗ್ರಹಪೀಡಿತ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

ಯಾವುದೋ ಅರೆಬರೆ ಸತ್ಯವಿರುವ ‘ವಾಟ್ಸ್‌ ಆ್ಯಪ್’ ಮಾಹಿತಿಗಳಂತೆ ಆಧಾರರಹಿತ ಉದಾಹರಣೆಯನ್ನು ನೀಡಿ ’ಕಮ್ಯುನಿಸ್ಟ್ ಚಾಳಿ’ ಎಂದು ನಿಂದನೆ ಮಾಡಿರುವ ಡಾ. ಆರ್. ಲಕ್ಷ್ಮೀನಾರಾಯಣರ ಅಭಿಪ್ರಾಯ (ವಾ.ವಾ., ಮಾರ್ಚ್‌ 27) ಪೂರ್ವಗ್ರಹಪೀಡಿತವಾಗಿದೆ.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕಮ್ಯುನಿಸ್ಟ್ ಸಿದ್ಧಾಂತದಡಿಯಲ್ಲಿ ಹಲವಾರು ಪಕ್ಷಗಳು, ಸಂಘಟನೆಗಳು ಇಂದಿಗೂ ಕಾರ್ಯೋನ್ಮುಖವಾಗಿವೆ. ವೈಜ್ಞಾನಿಕ ತತ್ವಗಳನ್ನು ಆಧರಿಸಿರುವ ಕಮ್ಯುನಿಸ್ಟ್ ಸಿದ್ಧಾಂತ ಅಜರಾಮರ. ನೈಜ ಹಾಗೂ ಕೃತ್ರಿಮ ಎಡಪಂಥೀಯ ವಿಚಾರಗಳನ್ನು ಸೂಕ್ಷ್ಮವಾಗಿ ಗುರುತಿಸಿ ಆಪಾದನೆ ಮಾಡುವುದು ಶ್ರೇಯಸ್ಕರ.

→ ಡಾ. ಭಾಸ್ಕರ ಹೇರ್ಳೆ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.