ADVERTISEMENT

ಬಸ್ ವ್ಯವಸ್ಥೆ ನೀಡಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಬನಶಂಕರಿ ಮೂರನೇ ಹಂತದಿಂದ ಎಂಜಿ ರಸ್ತೆಗೆ ನೇರವಾದ ಬಸ್ಸುಗಳಿಲ್ಲ. ಪ್ರಯಾಣಿಕರು ಶಿವಾಜಿನಗರದಿಂದ ಇಲ್ಲವೇ ಟೌನ್‌ಹಾಲ್‌ನಲ್ಲಿ ಇಳಿದುಕೊಂಡು ಮತ್ತೊಂದು ಬಸ್ ಹತ್ತಬೇಕು. ಕಚೇರಿ ಬೆಳಿಗ್ಗೆ 10ಕ್ಕೆ ಸೇರಬೇಕು ಎಂದು ಹೊರಟು ಬರುತ್ತೇವೆ.

ಶಿವಾಜಿನಗರದಿಂದ ಬೆಳಿಗ್ಗೆ 7.15ಕ್ಕೆ ಒಂದು ಬಸ್ ಇದ್ದು ಅದನ್ನು ಬಿಟ್ಟರೆ 9.20ಕ್ಕೆ ಮಾತ್ರ ಇನ್ನೊಂದು ಬಸ್ ಇದೆ. ಇದರಿಂದ ಸೂಕ್ತ ಸಮಯಕ್ಕೆ ಕಚೇರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಬನಶಂಕರಿ ಮೂರನೇ ಹಂತದಿಂದ ಎಂಜಿ ರಸ್ತೆಗೆ ಬಸ್ ವ್ಯವಸ್ಥೆ ಒದಗಿಸಿದರೆ ದಿನನಿತ್ಯ ಪ್ರಯಾಣಿಸುವ ಹತ್ತಾರು ಪ್ರಯಾಣಿಕರಿಗೆ ನೆರವಾಗಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.