ADVERTISEMENT

ಬಸ್ ಶೆಲ್ಟರ್ ನಿರ್ಮಿಸಿ

ವೈ.ವಿಜಯಕುಮಾರ್‌ರಾವ್ ಕದಂ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಸುಮಾರು 35 ವರ್ಷಗಳಿಂದಲೂ ವಿಜಯನಗರದಿಂದ ಜಯನಗರ 9ನೇ ಹಂತದವರೆಗೂ 60ಎ ನಗರ ಸಾರಿಗೆ ಬಸ್ಸು ಸಂಚರಿಸುವುದು ಸರಿಯಷ್ಟೆ?  ಬಸವನಗುಡಿ ಪೊಲೀಸ್ ಸ್ಟೇಷನ್ ಬಳಿ ಈ ಬಸ್ ನಿಲ್ಲುತ್ತದೆ. ಮಳೆ ಬಂದಾಗ ನಿಲ್ಲಲು ಅಲ್ಲಿ ಸಣ್ಣ ಶೆಲ್ಟರ್ ಕೂಡ ಇಲ್ಲ. ಇದುವರೆಗೂ ಬಸವನಗುಡಿಯ ಬಿ.ಬಿ.ಎಂ.ಪಿ. ಸದಸ್ಯರೂ ಸೇರಿದಂತೆ ಯಾರೂ ಇದರ ಬಗ್ಗೆ ಗಮನ ನೀಡದಿರುವುದು ವಿಷಾದನೀಯ ಸಂಗತಿ.

ಬಸವನಗುಡಿ ಪೊಲೀಸ್ ಸ್ಟೇಷನ್, ಕೃಷ್ಣರಾವ್ ಪಾಕ್ ಬಳಿ ಬಿ.ಎಂ.ಟಿ.ಸಿ. ಬಸ್ಸುಗಳು ನಿಲ್ಲುವ ಕಡೆ ನಾಗರಿಕರು ಮಳೆ, ಬಿಸಿಲಿನಲ್ಲಿ ತೊಂದರೆ ಆಗದಂತೆ ನಿಲ್ಲುವ ವ್ಯವಸ್ಥೆ ಮಾಡಿದರೆ ಒಳಿತು. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.