ADVERTISEMENT

ಬುಡಮೇಲಾದ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST

ಭಾರೀ ಆದರ್ಶಗಳೊಂದಿಗೆ ರಾಜಕೀಯ (ಪ್ರಜಾಕೀಯ) ಕ್ಷೇತ್ರಕ್ಕೆ ಇಳಿದಿದ್ದ ನಟ ಉಪೇಂದ್ರ ಅವರಿಗೆ ತಮ್ಮ ಪಕ್ಷ ತಳ ಊರುವ ಮೊದಲೇ ವಾಸ್ತವದ ಅನುಭವ ಆಗಿದೆ.

ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ದೊಡ್ಡ ಶಕ್ತಿಯಾಗಿ, ಆಡಳಿತ ನಡೆಸುತ್ತಿವೆ. ಉಪೇಂದ್ರ ಅವರ ಹೊಸ ಪಕ್ಷವು ರಾಜ್ಯದಲ್ಲಿ ಬೃಹತ್‌ ಶಕ್ತಿಯಾಗುವುದು ಎಂದು ಯಾರೂ ಭಾವಿಸಿರಲಾರರು. ಆದರೆ ಪರ್ಯಾಯ ರಾಜಕಾರಣದ ನಿಟ್ಟಿನಲ್ಲಿ ಒಂದು ಪ್ರಯತ್ನ ಆಗಬಹುದು ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ಈಗ ಬುಡಮೇಲಾಗಿದೆ. ಇದು ಕರ್ನಾಟಕ ರಾಜಕೀಯದ ದುರಂತ ಎನ್ನಬಹುದು.

ಉಪೇಂದ್ರ ಅವರು ತಮ್ಮ ರಾಜಕೀಯ ಕನಸನ್ನು ಸೆಟ್ಟೇರಿಸುವ ಮೊದಲು ಸ್ಕ್ರಿಪ್ಟ್‌ ಅನ್ನು ಇನ್ನೊಮ್ಮೆ ಆಳವಾಗಿ ಓದಬೇಕಾಗಿತ್ತು.

ADVERTISEMENT

– ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.