ವಿಲ್ಸನ್ ಗಾರ್ಡನ್ನ ಬಿಟಿಎಸ್ ಮುಖ್ಯರಸ್ತೆ ಆಡುಗೋಡಿ ಅಂಚೆ ಕಚೇರಿಯ ಹತ್ತಿರ ಇರುವ ಮ್ಯಾನ್ಹೋಲ್ ಅನೇಕ ವರ್ಷಗಳಿಂದ ತೆರೆದೇ ಇದೆ. ಈಗ ಈ ಮ್ಯಾನ್ಹೋಲ್ನಿಂದ ಚರಂಡಿ ನೀರು ಹೊರಬರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.
ಅಲ್ಲದೆ ಇಲ್ಲಿ ಓಡಾಡುವ ಶಾಲಾಮಕ್ಕಳು, ಹಿರಿಯನಾಗರಿಕರು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ 21–9–2013ರಂದು ಪತ್ರ ಬರೆಯಲಾಗಿದೆ. ಇದಾಗಿ ಎರಡು ತಿಂಗಳು ಕಳೆದಿದ್ದರೂ ಈವರೆಗೆ ಯಾರೂ ಕ್ರಮ ಕೈಗೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.