ಗಣ್ಯರು ತೀರಿಕೊಂಡಾಗ ಸರ್ಕಾರ ರಜೆ ಘೋಷಣೆ ಮಾಡುವುದು ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ಇದು ಎಷ್ಟರ ಮಟ್ಟಿಗೆ ಸಾರ್ಥಕತೆ ಪಡೆಯುತ್ತೆ ಅನ್ನುವುದು ನಮಗೆಲ್ಲರಿಗೂ ಗೊತ್ತಿದೆ. ವಿಧಿವಶರಾದವರ ಬಗ್ಗೆ ಅಗೌರವದಿಂದ ಈ ಮಾತು ಹೇಳುತ್ತಿಲ್ಲ.
ತೀರಿಕೊಂಡವರನ್ನು ರಜೆಯ ಮಜಾದಲ್ಲಿ ಮರೆತರೆ ಅವರ ಸಾಧನೆ ಜನಸಾಮಾನ್ಯರಿಗೆ ತಿಳಿಯುವುದಾದರೂ ಹೇಗೆ?
ನೌಕರರು ರಜೆಗಾಗಿ ಹಂಬಲಿಸಲಾರರು. ಕಡೇ ಪಕ್ಷ ವಿದ್ಯಾ ಇಲಾಖೆಯಲ್ಲಿ ರಜೆ ನೀಡದೆ ಅದೇ ದಿನ ಅಲ್ಲಿನ ಮಕ್ಕಳಿಗೆ ಅಗಲಿದ ಸಾಧಕರ ಪರಿಚಯ, ಸಾಧನೆಗೆ ಪ್ರೇರಣೆ, ಸಾಗಬೇಕಾದ ಹಾದಿಯನ್ನು ತಿಳಿಸುವುದು ಸೂಕ್ತವಲ್ಲವೆ?
ಬೇರೆ ದೇಶಗಳಲ್ಲಿ ಗಣ್ಯರು ಸತ್ತಾಗ ಒಂದು ಗಂಟೆ ಹೆಚ್ಚು ದುಡಿದು ಗೌರವ ಸಲ್ಲಿಸುತ್ತಾರೆ. ನಾವು ವಿದೇಶಿಯರ ಈ ಕ್ರಮವನ್ನು ಮೆಚ್ಚಿಕೊಳ್ಳುತ್ತೇವೆ. ಆದರೆ ಪಾಲಿಸುವುದಿಲ್ಲ. ಹೀಗೇಕೆ?
ಇನ್ನು ಮುಂದಾದರೂ ಅನಗತ್ಯ ರಜೆಗಳಿಗೆ ಸರ್ಕಾರ ಕಡಿವಾಣ ಹಾಕಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.