
ಪ್ರಜಾವಾಣಿ ವಾರ್ತೆ‘ಸಣ್ಣ ರೈತರಿಗೆ ಸರ್ಕಾರ ಸಹಾಯ ಧನ ಕೊಡುತ್ತದೆ. ಅರ್ಹ ರೈತರೆಲ್ಲರೂ ಕಂದಾಯ ಇಲಾಖೆಗೆ ಅರ್ಜಿ ಕೊಡಿ’ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕರು ಲಕ್ಯಾ ಹೋಬಳಿಯ ಒಂದು ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರೆನ್ನಲಾಗಿದೆ.
ಇದನ್ನೇ ನಂಬಿದ ಸಣ್ಣ ಮತ್ತು ಅತಿ ಸಣ್ಣ ರೈತರೆಲ್ಲರೂ ಕಳಸಾಪುರದ ನೆಮ್ಮದಿ ಕೇಂದ್ರದ ಮುಂದೆ ಇಡೀ ದಿನ ಕ್ಯೂನಲ್ಲಿ ನಿಂತು ಅರ್ಜಿ ಕೊಡುತ್ತಿರುವುದು ಯಾವ ಪುರುಷಾರ್ಥಕ್ಕೆ?
ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ, ಸರ್ಕಾರದಿಂದ ಯಾವ ಸೂಚನೆಯೂ ನಮಗೆ ಬಂದಿಲ್ಲ ಮತ್ತು ಅರ್ಜಿ ಕೊಡಬೇಕಾದ ಫಾರಂಗಳು ಬಂದಿಲ್ಲ. ಇದೆಲ್ಲ ಮುಗ್ಧ ರೈತರನ್ನು ದಿಕ್ಕುತಪ್ಪಿಸುವ ಕೆಲಸವೆಂದು ಹೇಳುತ್ತಾರೆ. ಶಾಸಕರು ನಿಜ ಸಂಗತಿಯನ್ನು ತಿಳಿಸುವರೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.