ADVERTISEMENT

ಶಿಕ್ಷಣದ ಸರ್ವತೋಮುಖ ಎತ್ತ?

ವಿಜಯಕುಮಾರ್‌ ಎಚ್‌.ಜಿ, ಹುತ್ತನಹಳ್ಳಿ, ಚಿಕ್ಕಜಾಲ
Published 15 ಜೂನ್ 2014, 19:30 IST
Last Updated 15 ಜೂನ್ 2014, 19:30 IST

‘ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ’ ಎಂಥ­ವರನ್ನೂ ಕಲಕುವಂತಿದ್ದ ವರದಿ (ಪ್ರ.ವಾ. ಜೂ.12). ಪರೀಕ್ಷಾ ಫಲಿತಾಂಶಗಳು ಪ್ರಕಟ­ವಾಗುವ ಕಾಲಕ್ಕೆ ಇಂತಹ ಘಟನೆಗಳು ಹೆಚ್ಚು.

  ಆ ವಿದ್ಯಾರ್ಥಿನಿಗೆ  ಪಿ.ಯು.ಸಿ.ಯಲ್ಲಿ ಶೇ 94 ಮತ್ತು ಸಿ.ಇ.ಟಿ.ಯ ವೈದ್ಯಕೀಯ ವಿಭಾಗದಲ್ಲಿ 6044ನೇ ರ್‍ಯಾಂಕ್‌. ಇದು ಶೈಕ್ಷಣಿಕವಾಗಿ ಉತ್ತಮ ಸಾಧನೆಯೇ. ಈ ಸಂಬಂಧದ ದಾಖಲೆ­ಗಳ ಪರಿಶೀಲನೆಗೆ ಬಂದಿದ್ದ ಆ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದದ್ದು ದುರಂತವೇ ಸರಿ.  ಇಷ್ಟು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಆಕೆ­ಯಲ್ಲಿ ಸನ್ನಿವೇಶವನ್ನು ಎದುರಿಸುವ ಮಾನಸಿಕ ಸಾಮರ್ಥ್ಯ ಬೆಳೆದಿರಲಿಲ್ಲ ಎಂದರೆ, ಶಿಕ್ಷಣದ ‘ಸರ್ವತೋಮುಖ ಅಭಿವೃದ್ಧಿ’ ಎಂಬ ಉದ್ದೇಶ ಈಡೇರಿಲ್ಲ ಎನ್ನುವುದು ಸ್ಪಷ್ಟವಾಗಿ ತೋರು­ತ್ತದೆ.

ಇದಕ್ಕೆಲ್ಲಾ ಕೇವಲ ಶಿಕ್ಷಣ ಪದ್ಧತಿಯನ್ನೋ, ಶಿಕ್ಷಕ­ರನ್ನೋ ಹೊಣೆ ಮಾಡದೆ ಸಮಾಜದ ಎಲ್ಲರೂ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು. ವಿದ್ಯಾರ್ಥಿ­ಗಳನ್ನು ದೈಹಿಕವಾಗಿ, ಮಾನಸಿಕವಾಗಿ ದೃಢವಾಗಿಸುವುದು ಶಿಕ್ಷಣದ ಗುರಿಯಾಗಬೇಕು. ಕೇವಲ ಅಂಕಗಳ, ರ್‍ಯಾಂಕ್‌ಗಳ ಶುಷ್ಕ ಶಿಕ್ಷಣ ಪ್ರಯೋಜನವಿಲ್ಲ. ಸದೃಢ ಶಿಕ್ಷಣಕ್ಕೆ ಪೋಷಕರು, ಸಂಪರ್ಕ ಮಾಧ್ಯಮಗಳು ಪೂರಕವಾಗಿ ವರ್ತಿಸ­ಬೇಕು. ಆಗ ಮಾತ್ರ ಸಮಾಜದ ಆಸ್ತಿಗ­ಳಾಗ­ಬಹುದಾದ ಅಮೂಲ್ಯ ಜೀವಗಳು ಉಳಿದಾವು.
ವಿಜಯಕುಮಾರ್‌ ಎಚ್‌.ಜಿ., ಮೈಲನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.