ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಧ್ಯಾ ಸುರಕ್ಷ ಯೋಜನೆಯಡಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಮಾಸಿಕ ವೇತನವನ್ನು ನೀಡದಿರುವುದು ದುರದೃಷ್ಟಕರ.
ಪ್ರತಿ ತಿಂಗಳೂ ಅಲ್ಪಸ್ವಲ್ಪ ಆಸರೆ ಆಗುತ್ತಿದ್ದ ಈ ಮಾಸಿಕ ವೇತನವನ್ನೇ ನಂಬಿರುವ ವೃದ್ಧರಿಗೆ ನಿಜಕ್ಕೂ ನಿರಾಶೆ ಆಗಿದೆ. ಈ ವಿಳಂಬಕ್ಕೆ ಕಾರಣ ತಿಳಿದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಸಮಸ್ಯೆಯ ಬಗೆಗೆ ಗಮನ ಹರಿಸುವುದು ಅವಶ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.