ADVERTISEMENT

ಉದ್ದೇಶ ಈಡೇರಲಿ

ಕೆ.ಎನ್‌.ಹರಿಹರ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST

‘ಡಾ. ಚಂದ್ರಶೇಖರ ಕಂಬಾರ ಪ್ರತಿಷ್ಠಾನ’ಕ್ಕೆ ಚಾಲನೆ ದೊರೆತಿರುವುದು ಸಂತೋಷದ ವಿಷಯ. ಪ್ರತಿಷ್ಠಾನವು ಕಂಬಾರರ ಸಾಹಿತ್ಯಕ್ಕೆ ಸೀಮಿತವಾಗದೆ, ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆಯೂ ಗಮನ ಹರಿಸಲಿದೆ ಎಂಬುದು ಇಲ್ಲಿ ಪ್ರಶಂಸನೀಯ ಅಂಶ.

ಇದು ಯಾವುದೇ ಪ್ರತಿಷ್ಠಾನಕ್ಕೆ ಅಗತ್ಯವಾದ ಅಂಶವೂ ಆಗಿದೆ. ಬರೀ ಪುಸ್ತಕಗಳನ್ನು ಮರುಮುದ್ರಣ ಮಾಡುವುದು ಅಂಥ ಬೆಳವಣಿಗೆಯಾಗಲಾರದು. ನನ್ನ ತಂದೆಯ (ಕೆ.ಎಸ್‌.ನ.) ಪ್ರತಿಷ್ಠಾನದ ವಿಕಸನಕ್ಕೆ ಶ್ರಮಿಸಿ, ಸಾಹಿತ್ಯ ತಿಳಿಯದವರ ಮೂಗುತೂರಿಕೆಯಿಂದ ಬೇಸತ್ತು ಹೊರಬಂದೆ.

ಡಾ. ಕಂಬಾರರ ಪ್ರತಿಷ್ಠಾನಕ್ಕೆ ಹೀಗಾಗಬಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.