ADVERTISEMENT

ಯುವಜನರಿಗೆ ಮನವರಿಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST

ಟಿಕ್‌ ಟಾಕ್‌ ಮಾಡಲು ಹೋಗಿ ಬೆನ್ನುಮುರಿ ಮುರಿದುಕೊಂಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ (23), ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದು ನೋವಿನ ಸಂಗತಿ. ಈಗಲಾದರೂ ಸರ್ಕಾರವು ಟಿಕ್‌ ಟಾಕ್ ವಿಡಿಯೊ ಶೇರಿಂಗ್‌ ಆ್ಯಪ್‌ ಅನ್ನು ನಿಷೇಧಿಸಬೇಕು. ಇದರ ಜೊತೆಗೆ ಯುವಜನ ಸಹ ಎಚ್ಚೆತ್ತುಕೊಳ್ಳಬೇಕು. ಈಗಂತೂ ಹಿರಿಯರಿಂದ ಯುವಕರವರೆಗೆ ಹಲವರು ಟಿಕ್ ಟಾಕ್ ಗೀಳು ಹತ್ತಿಸಿಕೊಂಡಿದ್ದಾರೆ. ಯುವಜನ ತಮ್ಮ ಭವಿಷ್ಯವನ್ನು ಮರೆತು ಮನರಂಜನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ತಮಗಾಗಿ ಹಾಗೂ ಸಮಾಜದ ಹಿತಕ್ಕಾಗಿ ಅವರು ಚಿಂತಿಸಬೇಕಾಗಿದೆ.

- ಹಾಜಪ್ಪಾ ಗಂಜಗೀರಿ,ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT