ADVERTISEMENT

ಸದ್ದಿಲ್ಲದೆ ಗದ್ದುಗೆ ಏರುವ ಪರಿ...!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಮಿತ್ತ ರಾಷ್ಟ್ರದ ಉದ್ದಗಲಕ್ಕೆ ರಥಯಾತ್ರೆ ನಡೆಸಿದವರು ಮತ್ತು ಇಟ್ಟಿಗೆ ಸಂಗ್ರಹಕ್ಕಾಗಿ ದಣಿದವರು ವಯೋವೃದ್ಧ ಲಾಲ್‌ಕೃಷ್ಣ ಅಡ್ವಾಣಿ. ಆದರೀಗ ರಾಮಮಂದಿರದ ಶಿಲಾನ್ಯಾಸಕ್ಕೆ ಬೆಳ್ಳಿ ಇಟ್ಟಿಗೆ ಇಡುವ ಗೌರವಕ್ಕೆ ಭಾಜನರಾಗುತ್ತಿರುವವರು ಪ್ರಧಾನಿ ನರೇಂದ್ರ ಮೋದಿ. ಸರಿಯೇ. ಆದರಿದು ಹೇಗಾಯಿತೆಂದರೆ, ಪಂಪ ಭಾರತದಲ್ಲಿ, ಪಂಚ ಪಾಂಡವರನ್ನು ಕಟ್ಟಿಕೊಂಡು ಉದ್ದಕ್ಕೂ ಪಾಡು ಪಟ್ಟವಳು ದ್ರೌಪದಿ; ಆದರೆ ಕೊನೆಯಲ್ಲಿ ಅರ್ಜುನನಿಗೆ ಪಟ್ಟಾಭಿಷೇಕವಾಗುವಾಗ ‘ಸದ್ದಿಲ್ಲದೆ ಗದ್ದುಗೆ ಏರಿದವಳು ಸುಭದ್ರೆ’ ಎಂಬಂತಾಗಿದೆ. ಅದೂ ಇಂದಿನ ಕೋವಿಡ್ ತಲ್ಲಣದ ಸಂದರ್ಭದಲ್ಲಿ.

– ಪ್ರೊ. ಶಿವರಾಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT