ADVERTISEMENT

ನಕಲಿ ದಾಖಲೆ ವೀರರಿದ್ದಾರೆ... ಎಚ್ಚರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 19:38 IST
Last Updated 9 ಡಿಸೆಂಬರ್ 2021, 19:38 IST

‘ಅರ್ಜಿ ಸಲ್ಲಿಸಿದ ಒಂದು ದಿನದಲ್ಲೇ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಆದೇಶ ಹೊರಡಿಸಲು ಅವಕಾಶ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು’ ಎಂದು ಕಂದಾಯ ಸಚಿವರು ಹೇಳಿರುವುದು (ಪ್ರ.ವಾ., ಡಿ. 9) ಸಂತೋಷದ ಸಂಗತಿ. ಆದರೆ ಸರ್ಕಾರ ಈ ಯೋಜನೆಯನ್ನು ಆತುರಾತುರವಾಗಿ ಜಾರಿಗೆ ತರದೆ, ಅದನ್ನು ಪರಿಶೀಲಿಸಿ, ತಜ್ಞರಿಂದ ಸಲಹೆ ಪಡೆಯುವುದು ಸೂಕ್ತ.

ಏಕೆಂದರೆ ಅಸಲಿ ದಾಖಲೆಗಳನ್ನು ಮೀರಿಸುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಯೋಜನೆಗಳ ಸದುದ್ದೇಶವನ್ನೇ ಬುಡಮೇಲು ಮಾಡುವ ಚಾಣಾಕ್ಷರು ನಮ್ಮಲ್ಲಿ ಇದ್ದಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ.

- ರಾ.ಬಾ.ವರದರಾಜನ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.