ADVERTISEMENT

ವಾಚಕರ ವಾಣಿ: ಪುಸ್ತಕ ಪಡೆಯಲು ಇರಲಿ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 19:30 IST
Last Updated 7 ಜೂನ್ 2021, 19:30 IST

ಮುಂಬರುವ ದಿನಗಳಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ, ವಿದ್ಯಾರ್ಥಿಗಳಾದ ನಾವು ಈಗಿರುವ ಸಮಯಾವಕಾಶವನ್ನು ಬಳಸಿಕೊಂಡು ತಯಾರಿ ನಡೆಸಲು ಪುಸ್ತಕಗಳು ಹೆಚ್ಚು ಉಪಯುಕ್ತ. ಜೊತೆಗೆ ಕೊರೊನಾ ಕಾರಣದಿಂದ ಹೆಚ್ಚಾಗಿ ಹೊರಗೆ ಹೋಗದೆ ಮನೆಗಳಲ್ಲೇ ಉಳಿದಿರುವುದರಿಂದ, ಇತರ ಪುಸ್ತಕಗಳನ್ನು ಓದಲು ಸಹ ಸಮಯಾವಕಾಶ ದೊರೆತಿದೆ. ಹೀಗಾಗಿ ಲಾಕ್‌ಡೌನ್‌ ನಿಯಮಾನುಸಾರ ಪುಸ್ತಕಗಳನ್ನು ಕೊಳ್ಳಲು ಅವಕಾಶ ಮಾಡಿಕೊಡುವುದು ಸೂಕ್ತ.

–ಜಗದೀಶ್ ಭಟ್, ನರಸಿಂಹರಾಜಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT